ನೇತ್ರಾವತಿಯ ಸಂಗಮದಲ್ಲಿ…

ರಾತ್ರಿ ಎಂಟು ಗಂಟೆಯ ಸುಗಮ ಬಸ್ ನಿಧಾನಕ್ಕೆ ಬೆಂಗಳೂರಿನ ಎಲ್ಲ ದಾರಿ ಮೂಸಿಕೊಂಡು, ಪೇಟೆ ಬಿಟ್ಟು ಮಂಗಳೂರಿನ ಕಡೆಗಿರುವ ಹೆದ್ದಾರಿಗೆ ಸೇರುವಾಗ ಹತ್ತೂವರೆ ಆಗಿಯೇ ಆಗುತ್ತಿತ್ತು. ಬೆಳಗ್ಗಿನ ಮೈಂದು ಬೀಳುವ ಸಮಯಕ್ಕೆ ಸರಿಯಾಗಿ ಮಂಗಳೂರಿನ ಪಂಪವೆಲ್ ತಲುಪಿ ಇಳಿಯುವಾಗ, ಘಟ್ಟದ ತಿರುವುಗಳಲ್ಲಿ ಅಲುಗಾಡಿದ ಜೀವ ಒಮ್ಮೆಲೇ ಮೈಯೊಳಗೆ ಬಂದುಬಿಡುವುದು. ಗಡಿಬಿಡಿಯಲ್ಲಿ ಭಾರದ ಬ್ಯಾಗನ್ನು ಬೆನ್ನಿಗಿಡಲು ಪುರುಸೊತ್ತಿಲ್ಲದೆ ಬಸ್ಸಿನಿಂದ ಕೆಳಗಿಳಿಯುವ  ಆತುರದಲ್ಲಿ, ಬ್ಯಾಗ್ ಇಳಿಸಿಕೊಡುತ್ತೇನೆನ್ನುವ…

ಮದಿಮ್ಮಾಳು

ಹವ್ಯಕ ಭಾಷೆಲಿ ಒಂದು ಕಥೆ ಉದಿಯಪ್ಪಗಳೇ ಅಬ್ಬೆ ದಿನುಗೋಳುದು, ಎಲ್ಲಿಯೋ ದೂರಲ್ಲಿ ಗುಡ್ಡೆಲಿ “ಏಳು, ಉದಿಯಾಯ್ದು, ಶಾಲೆಗೆ  ಹೋಪಲಿಲ್ಲೆಯ!” ಹೇಳಿದ ಹಾಂಗೆ ಕೇಳ್ತಾ ಇತ್ತು.. ಯೋ… ಏಳೆಕ್ಕೇ ಹೇಳಿ ಚೂರು ಬೇಜಾರುದೆ, ನಿನ್ನೆ ಕೋಪಿ ಬರೆಯದ್ದೇ ಹಾಂಗೆ ಮನುಗಿದ್ದು ನೆನಪಾಗಿ ಇನ್ನುದೇ ಉಪದ್ರ ಆತು. ಅಷ್ಟೊತ್ತಿಂಗೆ ಅಬ್ಬೆಯೇ ಉಪ್ಪರಿಗೆ ಹತ್ತಿ ಬಂದು, “ಇನ್ನು ಏಳದ್ರೆ ಆಗ” ಹೇಳಿಯಪ್ಪಗ, ಆತಂಬಗ ಏಳ್ತೆ, ಆದರೂ ಒಳಾಂದ…

ಬಾಳೇ ಬಾಳೆಲೆ

“ಬಾಳೇ ಬಂಗಾರವಾಯಿತು.. ” ಚಿಕ್ಕವಳಿದ್ದಾಗ ಶಾಲೆಯ ಭಜನೆಯಲ್ಲಿ ಮೊದಲ ಬಾರಿಗೆ ಕೇಳಿದಾಗ, ನನ್ನ ತಲೆಯೊಳಗೆ, ಕಾಣದ ದೇವರ ಕೈಯಿಂದ ಚಿನ್ನದ ಬೆಳಕು ಬಂದು ಬಾಳೆ ಸಸಿಯ ಮೇಲೆ ಬಿದ್ದು, ಬಾಳೆ ಗಿಡವೆ ಒಂದು ಚಿನ್ನದ ಗಿಡವಾಗಿ ಮಾರ್ಪಾಡಾಗುವ ಕಲ್ಪನೆ ಕಟ್ಟಿತ್ತು. “ಬಾಳೆ ಚಿನ್ನದ್ದು ಯಾಕೆ ಬೇಕು?”, “ಉಮ್ಮ..!!” ಎಷ್ಟೋ ಅರ್ಥ ಆಗದ ವಿಷಯದಲ್ಲಿ ಇದೂ ಒಂದು. ಈಗಲೂ “ಬಾಳೆ ಬಂಗಾರವಾಯಿತು” ಪದ್ಯ ಕೇಳಿದಾಗ…

ಕಾಯ್ಕಿಣಿ ಕಥೆಗಳು

ತರಂಗ ಹಾಗೂ ಸುಧಾ ಪುಸ್ತಕಗಳಲ್ಲಿ ಪ್ರಕಟವಾಗುತ್ತಿದ್ದ ‘ಕಥೆಗಳು’ ನನ್ನಲ್ಲಿ ಕಥೆಗಳನ್ನು ಓದುವ ಅಭಿರುಚಿಯನ್ನು ಹುಟ್ಟುಹಾಕಿಸಿತು.. ಹೈಸ್ಕೂಲ್, ಪಿಯುಸಿ ದಿನಗಳಲ್ಲಿ ಮನೆಯ ಅಟ್ಟ ಹತ್ತಿ, ಅಲ್ಲಿ ಅಟ್ಟಿ ಇಟ್ಟು ಕಟ್ಟಿಟ್ಟ ಪುಸ್ತಗಳಲ್ಲಿ ತರಂಗ ಸುಧಗಳನ್ನು ಹುಡುಕಿ ಎತ್ತಿಟ್ಟು ಓದುವುದು ಒಂದು ನಿಧಿ ಶೋಧನೆಯಷ್ಟೇ ಉತ್ಸಾಹದ ವಿಷಯವಾಗಿತ್ತು. ಒಮ್ಮೆಮ್ಮೆ ಆ ಪುಸ್ತಕಗಳ ಅಟ್ಟಿಯ ಎಡೆಯಲ್ಲಿ ಯುಗಾದಿ,ದೀಪಾವಳಿ ವಿಷೇಶಾಂಕವೇನಾದರು ಸಿಕ್ಕಿದರೆ ಅಂದು ಹಬ್ಬವೆ ಸರಿ! ಅವುಗಳಲ್ಲಿ ಬರುವ…

ಕ್ಷೌರ

ನಮ್ಮ ಕಡೆ(ಎಲ್ಲಾ ಕಡೆ) ಕ್ಷೌರ ಮಾಡಿ ಬಂದ ಮೇಲೆ ಸ್ನಾನ ಮಾಡುವ ತನಕ ಮೈಲಿಗೆ ಅಂತ ಲೆಕ್ಕ. ಅವರನ್ನು ಯಾರೂ ಮುಟ್ಟಲಿಕ್ಕೆ ಇಲ್ಲ, ಅವರೂ ಯಾರನ್ನೂ, ಯಾವುದನ್ನೂ ಮುಟ್ಟುವ ಹಾಗಿಲ್ಲ. ಏನನ್ನೂ ಕುಡಿಯುವ ತಿನ್ನುವ ಹಾಗಿಲ್ಲ. ಅವರುಟ್ಟ ಬಟ್ಟೆಯನ್ನು ಅವರೇ ತೊಳೆದು, ಮಿಂದು ಬರುವವರೆಗೆ ಅವರು ಮೈಲಿಗೆಯೇ. ನಾವು ಚಿಕ್ಕವರಿದ್ದಾಗ ಯಾಕೆ ಕ್ಷೌರ ಮಾಡಿಸಿ ಬಂದವರನ್ನು ಮುಟ್ಟಬಾರದು ಎಂದು ಕೇಳುವುದಕ್ಕೆ “ಅವರು ಕಾಕೆ(ಕಾಗೆ)”…

ಅರಿಝೋನದಲ್ಲೊಂದು ಸುಮಧುರ ಸ್ವರ ಸಂಜೆ

ಶುಕ್ರವಾರ ಜನವರಿ 25, 2019 ರಂದು ಸಂಜೆ ಅರಿಝೋನ ಟೆಂಪಿಯಲ್ಲಿರುವ ವೆಂಕಟಕೃಷ್ಣ ಕ್ಷೇತ್ರದಲ್ಲಿ ಕನ್ನಡ ಸಂಘ ಅರಿಝೋನದ ವತಿಯಿಂದ ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ಶ್ರೀಮತಿ ನಂದಿನಿ ರಾವ್ ರ ಸಂಗೀತ ಕಾರ್ಯಕ್ರಮ `ಸಂಗೀತ ರಸಸಂಜೆ’ ಏರ್ಪಡಿಸಲಾಗಿತ್ತು. ಸಂಗೀತದ ಹಿಮ್ಮೇಳದಲ್ಲಿ ಸ್ಥಳೀಯ ಕಲಾವಿದರಾದ ಶ್ರೀ ದೀಪಕ್ ಕುಲಕರ್ಣಿ ಅವರು ಹಾರ್ಮೋನಿಯಂ,ಶ್ರೀ ಸಂದೀಪ್ ಶಿರಾ ಅವರು ತಬಲಾ ಹಾಗೂ ಶ್ರೀಮತಿ ಲಕ್ಷ್ಮೀ…

ನೆನಪೇ ಸಂಗೀತ

ವಿದ್ಯಾಭೂಷಣರ ಜೀವನ ಕಥನ ಈ ಸಲ ಊರಿಗೆ ಹೋಗಿ ಬರುವಾಗ ಪುತ್ತೂರಿನ ಒಂದು ಪುಟ್ಟ ಪುಸ್ತಕದಂಗಡಿಯಿಂದ ಒಂದೆರಡು ಕನ್ನಡ ಪುಸ್ತಕಗಳನ್ನು ಕೊಂಡು ತಂದಿದ್ದೆ. ಪ್ಲಾಸ್ಟಿಕ್ ಇಲ್ಲದೆ ಪತ್ರಿಕೆಯ ಒಂದು ಹಾಳೆಯಲ್ಲಿ ಆ ಪುಸ್ತಕಗಳನ್ನು ಇಟ್ಟು ಚೆಂದಕೆ ಕಟ್ಟಿ ಕೊಟ್ಟಿದ್ದರು ಅಂಗಡಿಯವರು. ಪ್ರಯಾಣ ಮುಗಿಸಿ ಮನೆಗೆ ಬಂದು ಪುಸ್ತಕಗಳನ್ನು ಕಟ್ಟ ಬಿಡಿಸಿ ಜೋಡಿಸಿಕೊಂಡ ಮೇಲೆ, ಕನ್ನಡ ಪತ್ರಿಕೆಯ ಆ ಹಾಳೆಯನ್ನೆತ್ತಿಕೊಂಡೆ. ಚಿಕ್ಕಂದಿನಿಂದಲೇ ಸಕ್ಕರೆ ಮಿಠಾಯಿ…

ಕಶೀರ

ಕಾದಂಬರಿ – ಸಹನಾ ವಿಜಯಕುಮಾರ್ ಕಾಶ್ಮೀರದ ಬಗ್ಗೆ ಬರೆದಿರುವ ಪುಸ್ತಕ ಎಂದ ಮೇಲೆ ಅದರಲ್ಲಿ ಖಂಡಿತಾ ಹೃದಯ ಹಿಂಡುವ ಕಥೆ ಇದ್ದೇ ಇದೆ, ಹೇಗಪ್ಪಾ ಓದುವುದು ಎಂಬ ತಳಮಳ ಒಂದೆಡೆ. “ಕಾಶ್ಮೀರ” ಎಂದು ಹೇಳುತ್ತಿರುವಾಗ ‘ಕಾ’ ಎಂದಾಗ ಬಾಯಿ ಮನಸ್ಸುಗಳು ತೆರೆದರೂ, ‘ಶ್ಮೀ’ ಎನ್ನುವಲ್ಲಿಗೆ ಮತ್ತೆ ಗಂಟಲನ್ನು ಹೃದಯಕ್ಕೆ ಸೇರಿಸಿ ಎಳೆದಂತೆ, ಅದೊಂದು ಭಾರವಾದ, ತಂತಿ ಮೀಟಿದ ಹಾಗೆ ಒಂದು ಅವ್ಯಕ್ತ ಭಾವ;…