ಹಲಸಿನ ಪದ

(ಆರ್ಥಗಳಿಗೆ ಟಿಪ್ಪಣಿ ಸಂಖ್ಯೆಯನ್ನು ಒತ್ತಿ) ಆಚ ಮನೆಯ ಅಟ್ಟುಂಬಳಂದ ಬತ್ತಾ ಇದ್ದೊಂದು ಪರಿಮ್ಮಳಾ. ಹಲಸಿನ ಹಣ್ಣಿನ ಸುಟ್ಟವು ಕಾಣ್ತು, ಎಣ್ಣೆಗೆ ಬಿಟ್ಟವು ಬಳಂಬಳ.. ಆಗಳೇ ಕಂಡಿದೆ ರೆಚ್ಚೆಯ ಗೂಂಜಿಯ ಗಡಸುಗ ಅಗುದು ತಿಂಬದರ. ವರ್ಷದ ಶುರುವಿನ ಹಲಸಿನ ಹಣ್ಣು, ಬಿಡ್ಲೆ ಎಡಿಗ ನಮಗದರ..? ಈಗಳೇ ಹೆರಟರೆ ಸಿಕ್ಕುಗು ಎನಗೂ ಅಚ್ಚುಮಿಯಕ್ಕ ಕೊಡದ್ದಿರ. ಬಪ್ಪಗ ನಾಲ್ಕು ಸೊಳೆತೆಕ್ಕೊಳೆಕ್ಕು ನಾಳಂಗೆ ದೋಸೆ ಮಾಡ್ವದರ.. ದೋಸೆಗೆ ಶುಂಠಿ…

ಭರತ

ಹಗಲೆಲ್ಲಾ ಮುಗಿದಿತ್ತು ಆಗಷ್ಟೇ, ಎಂದಿನಂತೆ ಕೇಕಯದ ಗಿಡ-ಮರ-ಬಳ್ಳಿ, ಪ್ರಾಣಿ-ಪಕ್ಷಿ-ಮನುಷ್ಯರು ಅಂದಿನ ರಾತ್ರಿಯ ನೀರವ ಕತ್ತಲೆಗೆ ಒಗ್ಗಿಕೊಳ್ಳುತ್ತಿದ್ದವು. ಈ ಕತ್ತಲು, ಮೌನ, ಅದಿನ್ನೊಂದಿಷ್ಟು ಹೊತ್ತು, ಮತ್ತೆ ಬೆಳಕು ಬಂದೇ ಬರುವುದಲ್ಲ ಎಂಬ ಭರವಸೆ ಅವರಿಗೆ ಇದ್ದೇ ಇತ್ತು. ಅದೊಂದು ಹಕ್ಕಿ ಮಾತ್ರ ಸಧ್ಯಕ್ಕೆ ಕತ್ತಲು ಎಲ್ಲವನ್ನೂ ನುಂಗುತ್ತಿದೆಯೇನೋ ಎಂಬ ಹಾಗೆ “ಮೀ.. ಮೀ..” ಎಂದು ಅರಚುತ್ತಿತ್ತು. ಯಾವುದ್ಯಾವುದೋ ಹಕ್ಕಿ ಕೂಗಿತೆಂದೂ, ಯಾವುದೋ ಕೆಟ್ಟ ಸುದ್ದಿ…

ಅರಿಝೋನ ಕನ್ನಡಿಗರು ಮತ್ತು ಪರಿಸರ ಪ್ರೇಮ

ನಮ್ಮ ಊರಿಗಿಂತ ಅಮೆರಿಕದವರು ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎನ್ನುತ್ತದೆ ಉಳಿದ ಪ್ರಪಂಚ. ನಿಜವೂ ಹೌದು. ಹಾಗಿದ್ದರೆ ಅಮೆರಿಕದಲ್ಲಿ ವಾಸಿಸುವ ಕನ್ನಡಿಗರು ಹಾಗೆಯೇ ಇದ್ದಾರಾ? ಇಲ್ಲ ಎನ್ನುತ್ತಿದ್ದಾರೆ ಅರಿಝೋನದ ಕನ್ನಡಿಗರು. ಅರಿಝೋನ ಅಮೆರಿಕಾದ ಒಂದು ರಾಜ್ಯ, ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ತುಂಬಾ ಜನ ಕನ್ನಡಿಗರು ಇಲ್ಲಿ ವಾಸ ಮಾಡುತ್ತಾ ಇದ್ದಾರೆ. ಕೆಲವು ದಶಕಗಳ ಹಿಂದೆ ಹಲವು ಉತ್ಸಾಹಿ ಕನ್ನಡಿಗರು ಸೇರಿ ಕಟ್ಟಿದ…

ಕೇಳಿರಪ್ಪೋ ಕೇಳಿ!

ನಮ್ಮ ಮನೆಯವರು “ಇವತ್ತು ನಾನು ಪಾತ್ರೆ ತೊಳೆದು ಕೊಡುತ್ತೇನೆ” ಎಂದು ಹೇಳಿದ್ದು ಕೇಳಿ ನಾನು ನಕ್ಕು ಬಿಟ್ಟೆ! ಇವತ್ತೆಂತ ವಿಶೇಷ?! ಯಾರ ಹುಟ್ಟಿದ ಹಬ್ಬವೂ ಅಲ್ಲ, ವಾರ್ಷಿಕೋತ್ಸವವೂ ಇಲ್ಲ. ಸಾಲದ್ದಕ್ಕೆ ರಜೆಯ ದಿವಸವೂ ಅಲ್ಲ. ಎಂತಾಯಿತು ಇವರಿಗೆ? ಕಣ್ಣು ಸ್ವಲ್ಪ ಕಿರಿದು ಮಾಡಿ, ಬಲದ ಹುಬ್ಬನ್ನು ಸ್ವಲ್ಪವೆ ಮೇಲೆತ್ತಿ, ತುಟಿಯ ಬಳಭಾಗ ಮಾತ್ರ ಸ್ವಲ್ಪ ಎಳೆದು “ನಮ್ಮ ಮನೆಯ ಪಾತ್ರವನ್ನಾ?” ಹೌದು ಎಂಬ…

ನೇತ್ರಾವತಿಯ ಸಂಗಮದಲ್ಲಿ…

ರಾತ್ರಿ ಎಂಟು ಗಂಟೆಯ ಸುಗಮ ಬಸ್ ನಿಧಾನಕ್ಕೆ ಬೆಂಗಳೂರಿನ ಎಲ್ಲ ದಾರಿ ಮೂಸಿಕೊಂಡು, ಪೇಟೆ ಬಿಟ್ಟು ಮಂಗಳೂರಿನ ಕಡೆಗಿರುವ ಹೆದ್ದಾರಿಗೆ ಸೇರುವಾಗ ಹತ್ತೂವರೆ ಆಗಿಯೇ ಆಗುತ್ತಿತ್ತು. ಬೆಳಗ್ಗಿನ ಮೈಂದು ಬೀಳುವ ಸಮಯಕ್ಕೆ ಸರಿಯಾಗಿ ಮಂಗಳೂರಿನ ಪಂಪವೆಲ್ ತಲುಪಿ ಇಳಿಯುವಾಗ, ಘಟ್ಟದ ತಿರುವುಗಳಲ್ಲಿ ಅಲುಗಾಡಿದ ಜೀವ ಒಮ್ಮೆಲೇ ಮೈಯೊಳಗೆ ಬಂದುಬಿಡುವುದು. ಗಡಿಬಿಡಿಯಲ್ಲಿ ಭಾರದ ಬ್ಯಾಗನ್ನು ಬೆನ್ನಿಗಿಡಲು ಪುರುಸೊತ್ತಿಲ್ಲದೆ ಬಸ್ಸಿನಿಂದ ಕೆಳಗಿಳಿಯುವ  ಆತುರದಲ್ಲಿ, ಬ್ಯಾಗ್ ಇಳಿಸಿಕೊಡುತ್ತೇನೆನ್ನುವ…

ಮದಿಮ್ಮಾಳು

ಹವ್ಯಕ ಭಾಷೆಲಿ ಒಂದು ಕಥೆ ಉದಿಯಪ್ಪಗಳೇ ಅಬ್ಬೆ ದಿನುಗೋಳುದು, ಎಲ್ಲಿಯೋ ದೂರಲ್ಲಿ ಗುಡ್ಡೆಲಿ “ಏಳು, ಉದಿಯಾಯ್ದು, ಶಾಲೆಗೆ  ಹೋಪಲಿಲ್ಲೆಯ!” ಹೇಳಿದ ಹಾಂಗೆ ಕೇಳ್ತಾ ಇತ್ತು.. ಯೋ… ಏಳೆಕ್ಕೇ ಹೇಳಿ ಚೂರು ಬೇಜಾರುದೆ, ನಿನ್ನೆ ಕೋಪಿ ಬರೆಯದ್ದೇ ಹಾಂಗೆ ಮನುಗಿದ್ದು ನೆನಪಾಗಿ ಇನ್ನುದೇ ಉಪದ್ರ ಆತು. ಅಷ್ಟೊತ್ತಿಂಗೆ ಅಬ್ಬೆಯೇ ಉಪ್ಪರಿಗೆ ಹತ್ತಿ ಬಂದು, “ಇನ್ನು ಏಳದ್ರೆ ಆಗ” ಹೇಳಿಯಪ್ಪಗ, ಆತಂಬಗ ಏಳ್ತೆ, ಆದರೂ ಒಳಾಂದ…

ಬಾಳೇ ಬಾಳೆಲೆ

“ಬಾಳೇ ಬಂಗಾರವಾಯಿತು.. ” ಚಿಕ್ಕವಳಿದ್ದಾಗ ಶಾಲೆಯ ಭಜನೆಯಲ್ಲಿ ಮೊದಲ ಬಾರಿಗೆ ಕೇಳಿದಾಗ, ನನ್ನ ತಲೆಯೊಳಗೆ, ಕಾಣದ ದೇವರ ಕೈಯಿಂದ ಚಿನ್ನದ ಬೆಳಕು ಬಂದು ಬಾಳೆ ಸಸಿಯ ಮೇಲೆ ಬಿದ್ದು, ಬಾಳೆ ಗಿಡವೆ ಒಂದು ಚಿನ್ನದ ಗಿಡವಾಗಿ ಮಾರ್ಪಾಡಾಗುವ ಕಲ್ಪನೆ ಕಟ್ಟಿತ್ತು. “ಬಾಳೆ ಚಿನ್ನದ್ದು ಯಾಕೆ ಬೇಕು?”, “ಉಮ್ಮ..!!” ಎಷ್ಟೋ ಅರ್ಥ ಆಗದ ವಿಷಯದಲ್ಲಿ ಇದೂ ಒಂದು. ಈಗಲೂ “ಬಾಳೆ ಬಂಗಾರವಾಯಿತು” ಪದ್ಯ ಕೇಳಿದಾಗ…

ಕಾಯ್ಕಿಣಿ ಕಥೆಗಳು

ತರಂಗ ಹಾಗೂ ಸುಧಾ ಪುಸ್ತಕಗಳಲ್ಲಿ ಪ್ರಕಟವಾಗುತ್ತಿದ್ದ ‘ಕಥೆಗಳು’ ನನ್ನಲ್ಲಿ ಕಥೆಗಳನ್ನು ಓದುವ ಅಭಿರುಚಿಯನ್ನು ಹುಟ್ಟುಹಾಕಿಸಿತು.. ಹೈಸ್ಕೂಲ್, ಪಿಯುಸಿ ದಿನಗಳಲ್ಲಿ ಮನೆಯ ಅಟ್ಟ ಹತ್ತಿ, ಅಲ್ಲಿ ಅಟ್ಟಿ ಇಟ್ಟು ಕಟ್ಟಿಟ್ಟ ಪುಸ್ತಗಳಲ್ಲಿ ತರಂಗ ಸುಧಗಳನ್ನು ಹುಡುಕಿ ಎತ್ತಿಟ್ಟು ಓದುವುದು ಒಂದು ನಿಧಿ ಶೋಧನೆಯಷ್ಟೇ ಉತ್ಸಾಹದ ವಿಷಯವಾಗಿತ್ತು. ಒಮ್ಮೆಮ್ಮೆ ಆ ಪುಸ್ತಕಗಳ ಅಟ್ಟಿಯ ಎಡೆಯಲ್ಲಿ ಯುಗಾದಿ,ದೀಪಾವಳಿ ವಿಷೇಶಾಂಕವೇನಾದರು ಸಿಕ್ಕಿದರೆ ಅಂದು ಹಬ್ಬವೆ ಸರಿ! ಅವುಗಳಲ್ಲಿ ಬರುವ…