ಚಕ್ರ

ಮಡಿಯಿಂದ ಬಂದಳು, ಮುಡಿತೊಳೆದು ಬಂದಳುಕುಡುತುಂಬಿದಾ ಮೊರದ ಮೊರೆಗೆ.ಒಡಲ ತುಂಬಿಸುವಮ್ಮ, ಕೆಡ್ಡಾಸ ಮುಗಿಸಮ್ಮಬಿಡಿಸಮ್ಮ ಮೊಗ್ಗಿನ ನಗುವ. ಚಳಿಗಲ್ಲು ಹರಿದಾವು, ಬಿಳಿಮಲ್ಲೆ ಬಿರಿದಾವುನಳನಳಿಸೋ ಸುರಗಿಯ ಸೆರಗು.ಕಳಕಳಿಯ ಕಣ್ಣೋಟ, ಚಿಲಿಪಿಲಿಯ ಚೆಲ್ಲಾಟ,ಒಳಗೆಲ್ಲೋ ಹುಟ್ಟಿನ ಬೆರಗು. ಕೊರಡಲ್ಲಿ ಚಿಗುರೊಡೆಸು, ಬರದಲ್ಲೇ ಮಳೆ ಬರಿಸುಮರಳಲ್ಲೇ ಕಾದಿದೆ ಸೃಷ್ಟಿ.ಮರದಲ್ಲಿ ಹಣ್ಣಿಡಿಸು, ಮರಿಗಳ ಕಣ್ಬಿಡಿಸು,ಭರವಸೆ ಅಮ್ಮನ ದೃಷ್ಟಿ. ಗಣೇಶಕೃಷ್ಣ ಶಂಕರತೋಟFeb 27 2022 ಕೆಡ್ಡಾಸ = ಕೆಡ್ವಾಸ, ಭೂತಾಯಿ ಮುಟ್ಟಿನಿಂದ ಎದ್ದುಬರುವ ದಿನ,…

ಮೇಲ್ಪಙ್ಕ್ತಿ

ಶಿವ ಬರೆದ ಕಥೆಯ ಪುಟವೊಂದು ತೆರೆದುನನ್ನ ಮನೆ ಮೂಡಲಲಿ ಬೆಳಗಾಯಿತುಗಿರಿಸುತೆಯೆ ಕಿವಿಯ ಒಳಗಿಂದ ಹರಿದುಕಣ್ಣ ಹನಿಯೊಸರಿ ಪಾವನವಾಯಿತು ಉದಯನನ ಬೆರಳು ಮೀಟಿದರೆ ಸತತವಾಸವಿಗೆ ಘೋಷವತಿ ಮುದವಾಯಿತುವರರುಚಿಯ ಜೊತೆಯೊ ಚಾಣಕ್ಯಮತಿಯೊಭಾರತಿಗೆ ಚಂದ್ರ ದರುಶನವಾಯಿತು ಅವ ತುಳಿದ ಕಲ್ಲು ಅವ ಮುರಿದ ಬಿಲ್ಲು ಅವನಡೆದ ದಾರಿಯೇ ಶಿವವಾಯಿತುಹಿರಿದಾದ ಕಥೆಯು ಬರಿದಾದ ತಲೆಯತಗ್ಗಿಸಲು ಬಗ್ಗಿಸಲು ಮೊದಲಾಯಿತು ಗಣೇಶಕೃಷ್ಣ ಶಂಕರತೋಟ೬ ಮಾರ್ಚ್ ೨೦೨೧ I tweet @ganeshkrishna This…

ಎಷ್ಟರ ಷಕಾರ

ಮೃತ್-ಶಕಟಿಕಾ ನಾಟಕದ ಖಳನಾಯಕನಿಗೆ ಸ-ಕಾರ ಹೇಳಲು ಬಾರದೆ ಶ ಶ ಎಂದು ಹೇಳುತ್ತಿರುತ್ತಾನೆ. ಆ ಪಾತ್ರದ ಹೆಸರೇ “ಶಕಾರ”. ಕನ್ನಡದಲ್ಲಿ ಶಕಾರ ಷಕಾರಗಳನ್ನು ಸಾಕಾರ ಮಾಡುವ ಸಣ್ಣ ಪ್ರಯತ್ನ ಕೆಳಗಿದೆ. ಅಡಿ ಟಿಪ್ಪಣಿಗಳಿಗೆ ಸಂಖ್ಯೆಯನ್ನು ಒತ್ತಿ ಕನ್ನಡದಲ್ಲೇ ಹುಟ್ಟಿದ ಷಕಾರ ಶಬ್ದ ಕನ್ನಡದಲ್ಲಿ ಷಕಾರ ಇರುವುದು ಸಂಸ್ಕೃತ ಮೂಲದ ಶಬ್ದಗಳಲ್ಲಿ ಮಾತ್ರ, ಕನ್ನಡ ಮೂಲದ ಶಬ್ದಗಳಲ್ಲಿ ಸಕಾರ ಮಾತ್ರ ಇದೆ. ಇದಕ್ಕೆ ಅಪವಾದ…

ಹಗಲಿರುಳ ಹಲಗೆಯ ಹಾಡು

ಮೆತ್ತನೇ ಹತ್ತಿಯsಮೆತ್ತೆಗೇ ನೆತ್ತಿಯನ್ನೊತ್ತೆ ಅರಳಿತ್ತು ಆ ಇರುಳ ಹಗಲುಹೊತ್ತುಗೊತ್ತಿನ ಅರಿವುಇತ್ತು ಆ ಮತ್ತಿನಲುಎಚ್ಚರಿಸೆ ಅಚ್ಚರಿಯೆ ತಟ್ಟಿ ಹೆಗಲು ಬೆನ್ನುಡಿಗು ಮುನ್ನುಡಿಗುಕನ್ನಡಿಯು ನಡುವಿತ್ತುಅಡಿಗಡಿಗು ಬುಡಮೇಲು ಗೊಜಲು ಗೊಜಲುಉರುಳುತುರುಳುತ ಜಾವಸುರುಳಿಸುತ್ತಿದೆ ಭಾವಮುಗಿದಿತ್ತು ಕಥೆ ಮುನ್ನುಡಿಗು ಮೊದಲು ಅಳಿಸದಪಕ್ವ ಚಿತ್ತುಹಿಡಿ ಬಳಪ ಕ್ವಚಿತ್ತುಎಳೆದೆಳೆದು ಗೆರೆಯನ್ನು ಮಡಿಸಿ ಬೆರಳುಮೂಡಿತ್ತು ಉರುಟುರುಟೆಎಡಕೆ ಬಲಕೆಳೆದ ಗೆರೆಹಲಗೆಯೇ ಒಡಕೊಡಕು ಮಲಗು ಮರಳು -ಗಣೇಶಕೃಷ್ಣ ಶಂಕರತೋಟಏಪ್ರಿಲ್ ೨೪ ೨೦೧೯ ಆರ್ಥಗಳಿಗೆ ಟಿಪ್ಪಣಿ ಸಂಖ್ಯೆಯನ್ನು ಒತ್ತಿ…

ಬೀಸೋಕಲ್ಲಿನ ಕಥೆ

ಸಮೃದ್ಧವಾದ ಕನ್ನಡ ಜಾನಪದ ಸಾಹಿತ್ಯದಲ್ಲಿ ಎದ್ದು ಕಾಣುವ ಒಂದು ಪ್ರಕಾರ ಬೀಸೋ ಕಲ್ಲಿನ ಪದಗಳು. ದೈನಂದಿನ ಕೆಲಸಗಳ ಭಾಗವಾದ ರಾಗಿಯನ್ನು ಬೀಸಿ ಹಿಟ್ಟನ್ನಾಗಿಸುವ ಸಮಯದಲ್ಲಿ ಹಾಡಿಕೊಳ್ಳುತ್ತಿದ್ದ ಈ ಪದಗಳು ದಿನದಿಂದ ದಿನಕ್ಕೆ ಕೇಳುವುದು ಕಡಿಮೆಯಾಗುತ್ತಿದ್ದರೂ 4ನೆಯ ತರಗತಿಯ ಪಠ್ಯ ಪುಸ್ತಕದಲ್ಲಿ ಒಂದು ತ್ರಿಪದಿ ಇರುವುದು ಸಂತೋಷದ ವಿಷಯ. ಹಾಡುವ ಧಾಟಿ “ಕೂಸು ಇದ್ದ ಮನೆಗೆ ಬೀಸಣಿಗೆ….”. ಈ ಹಾಡಿನ ಹಿಂದೆ ಇರಬಹುದಾದ ಪುಟ್ಟ…

ಸಿಂಧುರ ವರ್ಣ

ಕರ್ಣಾಟಕ ಸಂಗೀತ ಕಲಿಯುತ್ತಿರುವ ಮಗುವಿನೊಂದಿಗೆ “ಶ್ರೀಇs ಗಣನಾಥ ಸಿಂದುರಾಅs ವರ್ಣ” ಎಂದು ಗುನುಗುನಿಸುತ್ತಾ…ಎಲಾ! ಗಣೇಶನಿಗೇಕೆ ಕೆಂಬಣ್ಣ, ಇದು ಸಿಂಧುರ = ಆನೆಯಿರಬೇಕು ಅನ್ನಿಸಿತು. ಹಾಗಾದರೆ ವರ್ಣ? ಕರ್ಣಾಟಕ ಸಂಗೀತದಲ್ಲಿ ಬಹುಕೃಷಿ ಮಾಡಿದ ಸ್ನೇಹಿತ ನಿಂದ ಸಾಹಿತ್ಯವನ್ನು ಪರೀಕ್ಷಿಸಿ ಹೇಳಿಸಿದೆ. (ಟಿಪ್ಪಣಿಗಳಿಗೆ ಸಂಖ್ಯೆಗಳನ್ನು ಕ್ಲಿಕ್ಕಿಸಿ) ಲಂಬೋದರ ಲಕುಮಿಕರಅಂಬಾಸುತ ಅಮರ ವಿನುತ ಶ್ರೀ ಗಣನಾಥ ಸಿಂಧುರ ವರ್ಣಕರುಣ ಸಾಗರ ಕರಿವದನ |ಲಂ|ಸಿದ್ಧ ಚಾರಣ ಗಣ ಸೇವಿತಸಿದ್ಧಿ…

ಕಡಲ್ಕೊರೆತದ ಅನುಕೂಲ

ಕೂಲಂಕುಷ ಸರಿಯೋ ಕೂಲಂಕಷವೋ? ಕೂಲಂಕಷವೇ ಸರಿ, ಆದರೆ ಯಾಕೆ? ಮೊನ್ನೆ ಒಬ್ಬರು twitter ನಲ್ಲಿ, ಸಂಸ್ಕೃತ (ಮತ್ತು by extension ಭಾರತೀಯ ಭಾಷೆಗಳಲ್ಲಿ) ಒಂದೇ ಶಬ್ದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಇದರಿಂದ confusion ಉಂಟಾಗುತ್ತದೆ ಎಂದರು. ವಿಷಯ ಇಷ್ಟೇ, ಎಲ್ಲಾ ಭಾಷೆಗಳಲ್ಲೂ ಶಬ್ದಗಳೊಳಗೇ ಅವುಗಳ ಅರ್ಥ ಹುದುಗಿರುತ್ತವೆ. ಅರ್ಥವನ್ನು ಶಬ್ದಕ್ಕೆ ಮೇಲಿಂದ ಅಂಗಿಯಂತೆ ತೊಡಿಸುವುದಲ್ಲ (dictionary…

ಮೂರು ಹನಿ ಬಾಳು

ದೋಣಿಗ ಹುಟ್ಟಂಗ, ಗಾಲಿಗ ಕೀಲಂಗಸಾಣಿಗ ಕಲ್ಲಿನ ಸೊಕ್ಕ !ಕಾಣದ ಕಾಮನ ಬಿಲ್ಲಿಗ ಹೆದೆಯಂಗಬಾಣಕ್ಕ ಇದ್ದ್ಹಂಗ ಪಕ್ಕ ಬಿಚ್ಚಿದ್ರ ನೆರಳಾತು ನೆಚ್ಚಿದ್ದ ಸೆರಗಾತುಕೆಚ್ಚೆದಿಗೆ ಸರಿ ವೀರಗಚ್ಚಿಕಚ್ಚಿದ್ದು ಕನಸಾತು, ಮುಚ್ಚಿದ್ದು ಮುನಿಸಾತು ಬಿಚ್ಚಿದ್ದು ಮನಸಾತು, ಹುಚ್ಚೇ! ಮುಂದಕ್ಕ ಹರದಾಳ ಚಂದಕ್ಕ ಬರತಾಳಹೊಂದಕ್ಕ ಯಲ್ಲವ್ನ ಕಾಲಮಂದಿಯಾಗಿನ ಕುರಿ ದೊಂದಿಯಾಗಿನ ಉರಿನಂದಕ್ಕ ಮೂರ್ಹನಿ ಬಾಳ. ಕರುಬಿಟ್ಟ ಕೆಚ್ಚಲು, ಬತ್ತೈತಿ ಬಚ್ಚಲುಮರುಗಕ ಎಲ್ಲೈತಿ ತೇವಮರದಂಗ ಇದ್ರಾತು ಬೇರೆ ಮರಿಯೋತಂಕಹಾರ್ಯಾವ ಹೊಟ್ಟೆಯ ಜೀವ…

ಕುರುಡನ ಜಯ

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಂ |ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ || ಧೃತರಾಷ್ಟ್ರನ ಹತಾಶೆಯ ಹಪಹಪದೊಂದಿಗೇ ಹರಿಯದೊಡಗುತ್ತದೆ ಮಹಾಕವಿ ಶ್ರೀವೇದವ್ಯಾಸರ ಮಹಾಭಾರತ ಮಹಾಕಾವ್ಯ. ಮೊದಲ ನೂರರಷ್ಟು ಶ್ಲೋಕಗಳು ಪೀಠಿಕೆ. ಇದರಲ್ಲಿ ಸೂತ ಪುರಾಣಿಕರು ನೈಮಿಷಾರಣ್ಯದಲ್ಲಿ ಯಜ್ಞಾನಂತರ ವಿಶ್ರಮಿಸುತ್ತಿದ್ದಾಗ, ಮೈಯೆಲ್ಲಾ ಕಿವಿಯಾಗಿ ಕಥೆ ಕೇಳಲುತ್ಸುಕರಾಗಿದ್ದ ತಮ್ಮ ಶಿಷ್ಯರಿಗೆ ಮಹಾಭಾರತದ ಕಥೆ ಹೇಳಲು ಆರಂಭಿಸಿದರು ಎನ್ನುವ ಪ್ರಸ್ತಾವನೆ ಬರುತ್ತದೆ. ಹಾಗೂ ಕಥೆಯ ಹಿನ್ನೆಲೆಯನ್ನೂ ಸ್ವಲ್ಪ…