Sojugada sooju mallige

ಕನ್ನಡದಲ್ಲಿದನ್ನೋದಲು ಇಲ್ಲಿ ಒತ್ತಿ Before the Isha foundation event on Feb 21 2020 I had not heard of this song. Couldn’t get enough of it, once I did. A search for the lyrics and meaning yielded not enough to my satisfaction. So I ventured to write…

ಮದಿಮ್ಮಾಳು

ಹವ್ಯಕ ಭಾಷೆಲಿ ಒಂದು ಕಥೆ ಉದಿಯಪ್ಪಗಳೇ ಅಬ್ಬೆ ದಿನುಗೋಳುದು, ಎಲ್ಲಿಯೋ ದೂರಲ್ಲಿ ಗುಡ್ಡೆಲಿ “ಏಳು, ಉದಿಯಾಯ್ದು, ಶಾಲೆಗೆ  ಹೋಪಲಿಲ್ಲೆಯ!” ಹೇಳಿದ ಹಾಂಗೆ ಕೇಳ್ತಾ ಇತ್ತು.. ಯೋ… ಏಳೆಕ್ಕೇ ಹೇಳಿ ಚೂರು ಬೇಜಾರುದೆ, ನಿನ್ನೆ ಕೋಪಿ ಬರೆಯದ್ದೇ ಹಾಂಗೆ ಮನುಗಿದ್ದು ನೆನಪಾಗಿ ಇನ್ನುದೇ ಉಪದ್ರ ಆತು. ಅಷ್ಟೊತ್ತಿಂಗೆ ಅಬ್ಬೆಯೇ ಉಪ್ಪರಿಗೆ ಹತ್ತಿ ಬಂದು, “ಇನ್ನು ಏಳದ್ರೆ ಆಗ” ಹೇಳಿಯಪ್ಪಗ, ಆತಂಬಗ ಏಳ್ತೆ, ಆದರೂ ಒಳಾಂದ…

ಚಕ್ರ

ಮಡಿಯಿಂದ ಬಂದಳು, ಮುಡಿತೊಳೆದು ಬಂದಳುಕುಡುತುಂಬಿದಾ ಮೊರದ ಮೊರೆಗೆ.ಒಡಲ ತುಂಬಿಸುವಮ್ಮ, ಕೆಡ್ಡಾಸ ಮುಗಿಸಮ್ಮಬಿಡಿಸಮ್ಮ ಮೊಗ್ಗಿನ ನಗುವ. ಚಳಿಗಲ್ಲು ಹರಿದಾವು, ಬಿಳಿಮಲ್ಲೆ ಬಿರಿದಾವುನಳನಳಿಸೋ ಸುರಗಿಯ ಸೆರಗು.ಕಳಕಳಿಯ ಕಣ್ಣೋಟ, ಚಿಲಿಪಿಲಿಯ ಚೆಲ್ಲಾಟ,ಒಳಗೆಲ್ಲೋ ಹುಟ್ಟಿನ ಬೆರಗು. ಕೊರಡಲ್ಲಿ ಚಿಗುರೊಡೆಸು, ಬರದಲ್ಲೇ ಮಳೆ ಬರಿಸುಮರಳಲ್ಲೇ ಕಾದಿದೆ ಸೃಷ್ಟಿ.ಮರದಲ್ಲಿ ಹಣ್ಣಿಡಿಸು, ಮರಿಗಳ ಕಣ್ಬಿಡಿಸು,ಭರವಸೆ ಅಮ್ಮನ ದೃಷ್ಟಿ. ಗಣೇಶಕೃಷ್ಣ ಶಂಕರತೋಟFeb 27 2022 ಕೆಡ್ಡಾಸ = ಕೆಡ್ವಾಸ, ಭೂತಾಯಿ ಮುಟ್ಟಿನಿಂದ ಎದ್ದುಬರುವ ದಿನ,…

ಮೇಲ್ಪಙ್ಕ್ತಿ

ಶಿವ ಬರೆದ ಕಥೆಯ ಪುಟವೊಂದು ತೆರೆದುನನ್ನ ಮನೆ ಮೂಡಲಲಿ ಬೆಳಗಾಯಿತುಗಿರಿಸುತೆಯೆ ಕಿವಿಯ ಒಳಗಿಂದ ಹರಿದುಕಣ್ಣ ಹನಿಯೊಸರಿ ಪಾವನವಾಯಿತು ಉದಯನನ ಬೆರಳು ಮೀಟಿದರೆ ಸತತವಾಸವಿಗೆ ಘೋಷವತಿ ಮುದವಾಯಿತುವರರುಚಿಯ ಜೊತೆಯೊ ಚಾಣಕ್ಯಮತಿಯೊಭಾರತಿಗೆ ಚಂದ್ರ ದರುಶನವಾಯಿತು ಅವ ತುಳಿದ ಕಲ್ಲು ಅವ ಮುರಿದ ಬಿಲ್ಲು ಅವನಡೆದ ದಾರಿಯೇ ಶಿವವಾಯಿತುಹಿರಿದಾದ ಕಥೆಯು ಬರಿದಾದ ತಲೆಯತಗ್ಗಿಸಲು ಬಗ್ಗಿಸಲು ಮೊದಲಾಯಿತು ಗಣೇಶಕೃಷ್ಣ ಶಂಕರತೋಟ೬ ಮಾರ್ಚ್ ೨೦೨೧ I tweet @ganeshkrishna This…

ಎಷ್ಟರ ಷಕಾರ

ಮೃತ್-ಶಕಟಿಕಾ ನಾಟಕದ ಖಳನಾಯಕನಿಗೆ ಸ-ಕಾರ ಹೇಳಲು ಬಾರದೆ ಶ ಶ ಎಂದು ಹೇಳುತ್ತಿರುತ್ತಾನೆ. ಆ ಪಾತ್ರದ ಹೆಸರೇ “ಶಕಾರ”. ಕನ್ನಡದಲ್ಲಿ ಶಕಾರ ಷಕಾರಗಳನ್ನು ಸಾಕಾರ ಮಾಡುವ ಸಣ್ಣ ಪ್ರಯತ್ನ ಕೆಳಗಿದೆ. ಅಡಿ ಟಿಪ್ಪಣಿಗಳಿಗೆ ಸಂಖ್ಯೆಯನ್ನು ಒತ್ತಿ ಕನ್ನಡದಲ್ಲೇ ಹುಟ್ಟಿದ ಷಕಾರ ಶಬ್ದ ಕನ್ನಡದಲ್ಲಿ ಷಕಾರ ಇರುವುದು ಸಂಸ್ಕೃತ ಮೂಲದ ಶಬ್ದಗಳಲ್ಲಿ ಮಾತ್ರ, ಕನ್ನಡ ಮೂಲದ ಶಬ್ದಗಳಲ್ಲಿ ಸಕಾರ ಮಾತ್ರ ಇದೆ. ಇದಕ್ಕೆ ಅಪವಾದ…

ಹಗಲಿರುಳ ಹಲಗೆಯ ಹಾಡು

ಮೆತ್ತನೇ ಹತ್ತಿಯsಮೆತ್ತೆಗೇ ನೆತ್ತಿಯನ್ನೊತ್ತೆ ಅರಳಿತ್ತು ಆ ಇರುಳ ಹಗಲುಹೊತ್ತುಗೊತ್ತಿನ ಅರಿವುಇತ್ತು ಆ ಮತ್ತಿನಲುಎಚ್ಚರಿಸೆ ಅಚ್ಚರಿಯೆ ತಟ್ಟಿ ಹೆಗಲು ಬೆನ್ನುಡಿಗು ಮುನ್ನುಡಿಗುಕನ್ನಡಿಯು ನಡುವಿತ್ತುಅಡಿಗಡಿಗು ಬುಡಮೇಲು ಗೊಜಲು ಗೊಜಲುಉರುಳುತುರುಳುತ ಜಾವಸುರುಳಿಸುತ್ತಿದೆ ಭಾವಮುಗಿದಿತ್ತು ಕಥೆ ಮುನ್ನುಡಿಗು ಮೊದಲು ಅಳಿಸದಪಕ್ವ ಚಿತ್ತುಹಿಡಿ ಬಳಪ ಕ್ವಚಿತ್ತುಎಳೆದೆಳೆದು ಗೆರೆಯನ್ನು ಮಡಿಸಿ ಬೆರಳುಮೂಡಿತ್ತು ಉರುಟುರುಟೆಎಡಕೆ ಬಲಕೆಳೆದ ಗೆರೆಹಲಗೆಯೇ ಒಡಕೊಡಕು ಮಲಗು ಮರಳು -ಗಣೇಶಕೃಷ್ಣ ಶಂಕರತೋಟಏಪ್ರಿಲ್ ೨೪ ೨೦೧೯ ಆರ್ಥಗಳಿಗೆ ಟಿಪ್ಪಣಿ ಸಂಖ್ಯೆಯನ್ನು ಒತ್ತಿ…

ಹಲಸಿನ ಪದ

(ಆರ್ಥಗಳಿಗೆ ಟಿಪ್ಪಣಿ ಸಂಖ್ಯೆಯನ್ನು ಒತ್ತಿ) ಆಚ ಮನೆಯ ಅಟ್ಟುಂಬಳಂದ ಬತ್ತಾ ಇದ್ದೊಂದು ಪರಿಮ್ಮಳಾ. ಹಲಸಿನ ಹಣ್ಣಿನ ಸುಟ್ಟವು ಕಾಣ್ತು, ಎಣ್ಣೆಗೆ ಬಿಟ್ಟವು ಬಳಂಬಳ.. ಆಗಳೇ ಕಂಡಿದೆ ರೆಚ್ಚೆಯ ಗೂಂಜಿಯ ಗಡಸುಗ ಅಗುದು ತಿಂಬದರ. ವರ್ಷದ ಶುರುವಿನ ಹಲಸಿನ ಹಣ್ಣು, ಬಿಡ್ಲೆ ಎಡಿಗ ನಮಗದರ..? ಈಗಳೇ ಹೆರಟರೆ ಸಿಕ್ಕುಗು ಎನಗೂ ಅಚ್ಚುಮಿಯಕ್ಕ ಕೊಡದ್ದಿರ. ಬಪ್ಪಗ ನಾಲ್ಕು ಸೊಳೆತೆಕ್ಕೊಳೆಕ್ಕು ನಾಳಂಗೆ ದೋಸೆ ಮಾಡ್ವದರ.. ದೋಸೆಗೆ ಶುಂಠಿ…

ಬೀಸೋಕಲ್ಲಿನ ಕಥೆ

ಸಮೃದ್ಧವಾದ ಕನ್ನಡ ಜಾನಪದ ಸಾಹಿತ್ಯದಲ್ಲಿ ಎದ್ದು ಕಾಣುವ ಒಂದು ಪ್ರಕಾರ ಬೀಸೋ ಕಲ್ಲಿನ ಪದಗಳು. ದೈನಂದಿನ ಕೆಲಸಗಳ ಭಾಗವಾದ ರಾಗಿಯನ್ನು ಬೀಸಿ ಹಿಟ್ಟನ್ನಾಗಿಸುವ ಸಮಯದಲ್ಲಿ ಹಾಡಿಕೊಳ್ಳುತ್ತಿದ್ದ ಈ ಪದಗಳು ದಿನದಿಂದ ದಿನಕ್ಕೆ ಕೇಳುವುದು ಕಡಿಮೆಯಾಗುತ್ತಿದ್ದರೂ 4ನೆಯ ತರಗತಿಯ ಪಠ್ಯ ಪುಸ್ತಕದಲ್ಲಿ ಒಂದು ತ್ರಿಪದಿ ಇರುವುದು ಸಂತೋಷದ ವಿಷಯ. ಹಾಡುವ ಧಾಟಿ “ಕೂಸು ಇದ್ದ ಮನೆಗೆ ಬೀಸಣಿಗೆ….”. ಈ ಹಾಡಿನ ಹಿಂದೆ ಇರಬಹುದಾದ ಪುಟ್ಟ…

ಸಿಂಧುರ ವರ್ಣ

ಕರ್ಣಾಟಕ ಸಂಗೀತ ಕಲಿಯುತ್ತಿರುವ ಮಗುವಿನೊಂದಿಗೆ “ಶ್ರೀಇs ಗಣನಾಥ ಸಿಂದುರಾಅs ವರ್ಣ” ಎಂದು ಗುನುಗುನಿಸುತ್ತಾ…ಎಲಾ! ಗಣೇಶನಿಗೇಕೆ ಕೆಂಬಣ್ಣ, ಇದು ಸಿಂಧುರ = ಆನೆಯಿರಬೇಕು ಅನ್ನಿಸಿತು. ಹಾಗಾದರೆ ವರ್ಣ? ಕರ್ಣಾಟಕ ಸಂಗೀತದಲ್ಲಿ ಬಹುಕೃಷಿ ಮಾಡಿದ ಸ್ನೇಹಿತ ನಿಂದ ಸಾಹಿತ್ಯವನ್ನು ಪರೀಕ್ಷಿಸಿ ಹೇಳಿಸಿದೆ. (ಟಿಪ್ಪಣಿಗಳಿಗೆ ಸಂಖ್ಯೆಗಳನ್ನು ಕ್ಲಿಕ್ಕಿಸಿ) ಲಂಬೋದರ ಲಕುಮಿಕರಅಂಬಾಸುತ ಅಮರ ವಿನುತ ಶ್ರೀ ಗಣನಾಥ ಸಿಂಧುರ ವರ್ಣಕರುಣ ಸಾಗರ ಕರಿವದನ |ಲಂ|ಸಿದ್ಧ ಚಾರಣ ಗಣ ಸೇವಿತಸಿದ್ಧಿ…

ಕಡಲ್ಕೊರೆತದ ಅನುಕೂಲ

ಕೂಲಂಕುಷ ಸರಿಯೋ ಕೂಲಂಕಷವೋ? ಕೂಲಂಕಷವೇ ಸರಿ, ಆದರೆ ಯಾಕೆ? ಮೊನ್ನೆ ಒಬ್ಬರು twitter ನಲ್ಲಿ, ಸಂಸ್ಕೃತ (ಮತ್ತು by extension ಭಾರತೀಯ ಭಾಷೆಗಳಲ್ಲಿ) ಒಂದೇ ಶಬ್ದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಇದರಿಂದ confusion ಉಂಟಾಗುತ್ತದೆ ಎಂದರು. ವಿಷಯ ಇಷ್ಟೇ, ಎಲ್ಲಾ ಭಾಷೆಗಳಲ್ಲೂ ಶಬ್ದಗಳೊಳಗೇ ಅವುಗಳ ಅರ್ಥ ಹುದುಗಿರುತ್ತವೆ. ಅರ್ಥವನ್ನು ಶಬ್ದಕ್ಕೆ ಮೇಲಿಂದ ಅಂಗಿಯಂತೆ ತೊಡಿಸುವುದಲ್ಲ (dictionary…

ಭರತ

ಹಗಲೆಲ್ಲಾ ಮುಗಿದಿತ್ತು ಆಗಷ್ಟೇ, ಎಂದಿನಂತೆ ಕೇಕಯದ ಗಿಡ-ಮರ-ಬಳ್ಳಿ, ಪ್ರಾಣಿ-ಪಕ್ಷಿ-ಮನುಷ್ಯರು ಅಂದಿನ ರಾತ್ರಿಯ ನೀರವ ಕತ್ತಲೆಗೆ ಒಗ್ಗಿಕೊಳ್ಳುತ್ತಿದ್ದವು. ಈ ಕತ್ತಲು, ಮೌನ, ಅದಿನ್ನೊಂದಿಷ್ಟು ಹೊತ್ತು, ಮತ್ತೆ ಬೆಳಕು ಬಂದೇ ಬರುವುದಲ್ಲ ಎಂಬ ಭರವಸೆ ಅವರಿಗೆ ಇದ್ದೇ ಇತ್ತು. ಅದೊಂದು ಹಕ್ಕಿ ಮಾತ್ರ ಸಧ್ಯಕ್ಕೆ ಕತ್ತಲು ಎಲ್ಲವನ್ನೂ ನುಂಗುತ್ತಿದೆಯೇನೋ ಎಂಬ ಹಾಗೆ “ಮೀ.. ಮೀ..” ಎಂದು ಅರಚುತ್ತಿತ್ತು. ಯಾವುದ್ಯಾವುದೋ ಹಕ್ಕಿ ಕೂಗಿತೆಂದೂ, ಯಾವುದೋ ಕೆಟ್ಟ ಸುದ್ದಿ…